Tuesday 13 December 2016

ಕವಿತೆ

ನಡುರಾತ್ರಿ ಕಳೆದ ಮೇಲೆ
ನಡುರಾತ್ರಿ ಕಳೆದ ಮೇಲೆ
ಕನಸುಗಳೆಲ್ಲ
ಎಚ್ಚರವಾಗಿಬಿಟ್ಟಿವೆ

ಇಲ್ಲಿ ವಿರಹದುರಿ
ಅಲ್ಲಿ ಅಮಲೆರಿ
ತೊಳಲಾಡುತ್ತಿವೆ

ಕೌದಿಯೊಳಗಿನ
ನೋವು
ಜಮುಕಾನದಡಿಯ
ಕಾವು

ದಿಂಬಿನೊಳಗಡೆ 
ಕರಗಿದ ಕಣ್ಣಿರು
ಮೌನದಲ್ಲಿ
ಸೆರಿದ ನಿಟ್ಟುಸಿರು

ಕನಸುಗಳು
ಮಲಗುವುದಿಲ್ಲವೆನೊ
ಬಾಕಿ ಉಳಿದಿರುವ ನೆನಪು
ಇಡೆರದ ಪೋಲಿ ಆಸೆಗಳು
ಎಲ್ಲವನು ತಂದು
ರಾಶಿಹಾಕ್ಕಿಕೊಳ್ಳುತ್ತಿದೆ
ಇಂದು ನಿದ್ದೆಯ
ಕೊಲೆಯಾಗುವುದು ಖಂಡಿತ

#ಉತ್ತಮ್#

ಕವಿತೆ

ನನ್ನೊಂದಿಗೆ ಹುಟ್ಟಿದ
ನನ್ನೊಂದಿಗೆ ಹುಟ್ಟಿದ
ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ
ನನ್ನೊಳಗೆ ಬೆಳೆಯುತ್ತಿರುವ
ದ್ವಂದ್ವಗಳಿಗೂ ಕಾರಣ ಗೊತ್ತಿಲ್ಲ

ಒಮ್ಮೊಮ್ಮೆ ಮನಸಿಗೆ
ರಂದ್ರ ಕೊರೆದು
ಹೊರಗಿಣುಕ್ಕುತ್ತವೆ
ಅಲ್ಲೆನಿದೆ ಬರಿ ಕತ್ತಲು
ಹುಚ್ಚೆದ್ದು ಕುಣಿಯುತ್ತಿರುವ
ಮನಸುಗಳೆಲ್ಲ ಅರೆ ಬೆತ್ತಲು
 
ಕರುಳು ಬಳ್ಳಿ ಹೆತ್ತೊಡಲು
ಸಂಭಂದ ಬಾಂಧವ್ಯ
ಸ್ನೇಹ ಪ್ರೀತಿ ಎಲ್ಲಾವೂ
ಆಗಗ ಎದೆಯೊಳಗೆ
ಮಂಥನಕಿಳಿಯುತ್ತವೆ

ಆಟ ಪಾಠ
ಕರ್ಮ ಧರ್ಮ
ಮದುವೆ ಮಕ್ಕಳು
ಅನುಮಾನದ ಬದುಕಲಿ
ಅನಿವಾರ್ಯವಾಗಿ ಹೆಜ್ಜೆ ಹಾಕುತ್ತವೆ

ತಲೆಯಲ್ಲಿರುವ ದ್ವಂದ್ವಗಳು
ಬಡಿದಟ್ಟಕ್ಕಿಳಿದು
ಎದೆಯಲ್ಲಿರುವ ಪ್ರಶ್ನೆಗಳಿಗೆ
ಹುಚ್ಚು ಹೆಚ್ಚಗಿ
ದೇಹವೆ ನಿರ್ಜಿವವಾಗಿ
ಬಿದ್ದಿರುವಾಗ

ಅದ್ಯಾವ ಸಂಬಂದಗಳು
ಕರ್ಮದೊಳಗಿನ ಧರ್ಮವು
ನಿ ಕಲಿತ ಪಾಠದೊಳಗಿನ ವಿದ್ಯೆಯು
ನಿನ್ನನ್ನು ಸಜೀವಗೊಳಿಸುವುದಿಲ್ಲ

#ಉತ್ತಮ್#

ಕವಿತೆ

ನಿನ್ನ ಖುಷಿಗಾಗಿ ಬರೆದ
ನಿನ್ನ ಖುಷಿಗಾಗಿ ಬರೆದ
ಕವಿತೆಗಳನು ಹೆಕ್ಕಿ ತೆಗೆದು
ತಿದ್ದಿ ತಿಡಿ ಪರಮರ್ಶಿಸಿ
ನವನವಿನವಾಗಿಸಿ
ಹೊಸದಾಗಿ ಬರೆದಿಹೆನು

ಅದರೆನು ಗೆಳತಿ
ನಿನ್ನ ನೆನಪ ಹೊರತಾಗಿ
ನಿನ್ನನು ಪಡೆಯುವ
ಯಾವ ನೀರಿಕ್ಷೆಗಳು
ನನ್ನಲಿ ಉಳಿದಿಲ್ಲ

ನಿನ್ನ ಖುಷಿಯ ಕ್ಷಣಕೆ
ನಿನ್ನ ಒಲುಮೆಯ ಭಾವಕ್ಕೆ
ನನ್ನಲ್ಲಿ ಪದಗಳು ಉಳಿದಿಲ್ಲ
ಕವಿತೆಯೆಕೊ ಸೋಲುತ್ತಿದೆ

ನಿನ್ನ ನೆನಪುಗಳಷ್ಟೆ
ನನ್ನೆದೆಯ ಪಾಲು
ಸತ್ತ ಕವಿತೆಯ ಸಾಲು
ಕವಿತೆಯೆಂಬುದು
ನೋವಿನ ಬಾಳು

#ಉತ್ತಮ್#

ಕವಿತೆ

ಹರಿದ ಚಪ್ಪಲಿಗಾಕಿದ
ಹರಿದ ಚಪ್ಪಲಿಗಾಕಿದ
ಹೊಲಿಗೆಯ ಗಂಟು
ಕಾಲಿಗೊತ್ತಿ ಬಾವಗಿ
ಬಾವು ನೊವಗಿ
ಚಿತ್ರಹಿಂಸೆ ನಿಡುತ್ತಿದೆ

ಚಪ್ಪಲಿಯದೆ ತಪ್ಪೊ
ಅಳತೆ ಬದಲಿಸಿದ
ನನ್ನ ತಪ್ಪಿದೆಯೊ
ಉಳಿಸಲು ಗಂಟು
ಹಾಕ್ಕಿದೆ ತಪ್ಪೆನಿಸುತ್ತದೆ

ತುಸು ದೂರ ಸಾಗಿ
ನೋವು ತಡೆಯಲಾರದೆ
ಚಪ್ಪಲಿ ಕಿತ್ತಸೆದು
ನಡೆಯತೊಡಗಿದೆ
ನೋವು ಮುಗಿದು
ಬಾವು ಮಾಯವಾಗಿ
ಗುರಿಯ ಮುಟ್ಟಿದೆ

#ಉತ್ತಮ್#

Wednesday 10 August 2016

ಕವನ

ಬದಲಾಯ್ತು ಬದುಕು
ಬಯಲದ ಬಣ್ಣದಂತೆ 
ಹೊದಿಕೆಯೋಳಗಿನ ಕನಸುಗಳಂತೆ
ನಿನ್ನೆ ಯಾರದೋ
ಇಂದು ಯಾವುದೋ
ನಾಳೆ ನನ್ನದೆ
ಬದಲಾಗಿ ಬಯಲಾಗಬಹುದು

                                      ನಿರಂತರ ..........

Saturday 28 May 2016

ವಯಸ್ಸಿಗೆ ಬದಲಾಗೊ ಆಧ್ಯಾತ್ಮ

ಭಕ್ತಿ ಆಧ್ಯಾತ್ಮ ಅನ್ನುವ ವಿಷಯಗಳು ಮನುಷ್ಯನ ಸುಕ್ಷ್ಮವಾದ ಭಾವನೆಗಳು, ಮನುಷ್ಯ ಭಕ್ತಿಯ ಮುಖಂತರ ನಂಬಿಕೆಯನ್ನು ಕಂಡುಕೊಳ್ಳುತ್ತಾನೆ ನೆಮ್ಮದಿಯನ್ನು ಹುಡುಕುತ್ತಾನೆ, ಹಾಗಾಗಿಯೇ ಇಂದು ಭಕ್ತಿ ಆಧ್ಯಾತ್ಮ ಎಂಬ ವಿಷಯಗಳು ವ್ಯಾಪಾರವಾಗುತ್ತಿದೆ. ಅದೇನೆ ಇರಲಿ ಈ ಭಕ್ತಿ ಅನ್ನೋ ಭಾವನೆ ಮನುಷ್ಯನ ವಯಸ್ಸಿಗೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ
   ಬಾಲ್ಯದಲ್ಲಿ ದೇವರು ಅಂದ್ರೆ ಅದೇನೋ ಭಯ, ದೇವರಿಗೆ ನೈವೇದ್ಯ ಮಾಡ್ದೆ ಪ್ರಸಾದ ತಿಂದ್ರೆ ದೇವರು ಮೂಗು ಕುಯ್ಯುತ್ತೆ ಅಂತ ದೊಡ್ಡವರು ಹೆದರಿಕೆ ಹುಟ್ಟಿಸ್ತ. ಇದ್ರೂ ಆದ್ದರಿಂದ ನಾವ್ಯರು ಪೂಜೆಗೆ ಮುನ್ನ ಆಸೆ ಇದ್ರೂ ಪ್ರಸಾದಕ್ಕೆ ಕೈ ಹಾಕ್ತಾ ಇರಲಿಲ್ಲ, ದೇವರು ಅಂದ್ರೆ ಕಷ್ಟದಲ್ಲಿ ಕಾಪಡೊ ಸೂಪರ್ ಪವರ್, ಆತ ಮಿರಕುಲ್ ಮ್ಯಾಜಿಕ್ ಎಲ್ಲಾ ಮಾಡಬಲ್ಲ ಮಾಯವಿ ಅನ್ಕೊತಿದ್ವಿ ಹಾಗಾಗಿಯೇ ಹೊಮ್ ವರ್ಕ್ ಕೊಟ್ಟ ಟೀಚರ್ ಹೊಮ್ ವರ್ಕ್ ನೋಡೋಕೆ ಆ ದಿನ ಕ್ಲಾಸ್ ಗೆ ಬರದೆ ಇರೊ ಹಾಗೆ ಮಾಡಪ್ಪ , ಮಾಡಿದ ತಪ್ಪಿಗೆ ಅಮ್ಮ ಹೊಡಿದಿರೊ ಹಾಗೆ ಮಾಡಪ್ಪ ಅಂತ ಬೇಡ್ಕೊತಿದ್ವಿ
     ಸ್ವಲ್ಪ ದೊಡ್ಡವರ ಆದ್ವಿ ಆಗ  ಮೈ ಮೇಲೆ ಬರೊ ದೇವ್ರು ಕಣ್ಣೆ ಎದ್ರಿಗೆ ಮ್ಯಾಜಿಕ್ ಮಾಡೊ ದೇವ್ರು ನಾನು ಪಾಸೊ ಫೆಲೊ ಅಂತ ಬಾಯಿಬಿಟ್ಟು ಹೇಳೊ ದೇವ್ರು ಅಪ್ಪಣೆ ಕೊಡೊ ದೇವ್ರು ಇವೆಲ್ಲ ಪರಿಚಯ ಅದವು ಅಷ್ಟೆ ಅಲ್ಲಾ ಆ ದೇವ್ರುಗಳು ನಮ್ಮ. ಇಷ್ಟ ಕಷ್ಟ ಕೂಡ ಆದವು
    ಇ ಕಾಲೇಜು ಹರೆಯ ಅಂತ ಬಂದ್ಮೆಲೆ ಸ್ವಲ್ಪ ದೇವ್ರುನ ಮರಿಯೋಕೆ ಶುರು ಮಾಡಿದ್ವಿ ಅನ್ಸುತ್ತೆ ದೇವ್ರು ಭಕ್ತಿ ಪೂಜೆ ಅಂತ ಅಮ್ಮ ಅಪ್ಪ ಅಂದ್ರೆ ಎಲ್ಲಿದ್ದಾನೆ ದೇವ್ರು ಅವೆಲ್ಲ ಸುಳ್ಳು ಅಂತ ಅಪ್ಪಟ ನಾಸ್ತಿಕರ ತರ ಮಾತಡೊಕೆ ಸುರುಮಾಡಿ ಬಿಡ್ತಿವಿ.ಆದ್ರೂ ಎಕ್ಸಾಂ ಲವ್ ವಿಷಯಕ್ಕೆ ಎಷ್ಟೇ ದೇವ್ರು ಗೆ ಬೈದಿದ್ರೂ ಮತ್ತೆ ಅಷ್ಟೆ ಭಕ್ತಿಯಿಂದ ಬೆಡ್ಕೊಬಿಡ್ತ ಇದ್ವು.
  ಇ ಕಾಲೇಜು ಹರೆಯ ಎಲ್ಲಾ ಮುಗ್ಧ ಮೇಲೆ ಕೆಲಸ ಹುಡುಕೊಂಡ್ ಹೊರಟಾಗ ದೇವ್ರು ಬೇಕೆ ಬೇಕು ಇನ್ನು ಕೆಲ್ಸ ಸಿಕ್ಕಿದ ಮೇಲೆ ಕಷ್ಟ ಸಾಲ ಊಟದ ಬೆಲೆ ಎಲ್ಲಾ ಗೊತ್ತಗಿರುತ್ತೆ, ಆಗ ಅದೆ ದೇವ್ರು ಕಾಯಕವೇ ಕೈಲಾಸ ಆಗ ಪ್ರತಿವಾರ ಬಂದು ದೇವಾಸ್ಥಾನ ಇಂತಿಷ್ಟೆ ಅಂತ ಕಾಣಿಕೆ ಕೆಲವು ಹರಕೆ ಹಣ್ಣು ಕಾಯಿ ವಿಶೇಷ ಪೂಜೆ ಅಂತ ನಮ್ಮಿಂದ ದೇವರಿಗೆ ಸಂದಾಯ ಆಗುತ್ತೆ.
   ಒಂದು ಮದುವೆ ಅಂತ ಆದ ಮೇಲೆ ಶುರುವಾಗೊದು ನಿಜವಾದ ಮೌಲ್ಯಯುತವಾದ ಭಕ್ತಿ, ಆದ್ಯತ್ಮ ಅನೋದು ಮನುಷ್ಯನ  ಜೀವನದಲ್ಲಿ ಶುರು ಆಗೋದು. ದೇವರು ಅಂದ್ರೆ ನಂಬಿಕೆ ನೆಮ್ಮದಿ  ಧ್ಯಾನ ಅಂತ ಅರ್ಥ ಆಗಿ ಬಿಡುತ್ತೆ. ಮನೆಯ ಜಂಜಾಟಗಳು ನೋವುಗಳು ಕಷ್ಟಗಳಿಂದ ಮುಕ್ತಿ ಪಡೆಯಲು ಒಂದು ದೇವಾಸ್ಥಾನ ಇಲ್ಲಾ ಒಬ್ಬ ದೇವ ಮಾನವನನ್ನು ಅವರೆ ಆಯ್ಕೆಮಾಡಿಕೊಂಡು ಬಿಡುತ್ತಾರೆ ಇವರ ಹರಕೆ ಕಾಣಿಕೆಗಳೆಲ್ಲವೂ ಕ್ಷಣಿಕ, ಕಷ್ಟ ಪರಿಹಾರಕ್ಕಾದ್ರೂ ಅದರ ಮೂಲ ಉದ್ದೇಶ. ಮಾತ್ರ ನೆಮ್ಮದಿ ಪಡೆಯೊದು.
   ಇನ್ನೂ ವಯಸ್ಸಾದಂತೆಲ್ಲಾ ರಾಮ ಕೃಷ್ಣ ಅಂತ ಕಾಡು ಸೆರಿಕೊಳ್ಳೊದು ಅಂತಾರೆ ಅವರು ಎಲ್ಲಾ ದೇವ್ರು, ದೇವಮಾನವರನ್ನು ನೋಡಿ ಬಿಟ್ಟಿರುತ್ತಾರೆ ಅವರಿಗೆ ದೇವ್ರು ದೇವ ಮಾನವನಿಗಿಂತ ಹೆಚ್ಚಾಗಿ ನೆಮ್ಮದಿ ಶಾಂತಿ ಬೇಕಾಗಿರುತ್ತೆ ಹಾಗಾಗಿ ಅವ್ರು ಮಾಡಿದ ಪಾಪಗಳೆಲ್ಲ ಕಳೆದು ಪುಣ್ಯ ಸಂಪಾದಿಸಲು ತೀರ್ಥ ಯಾತ್ರೆ ಹೊರಟು ಬಿಡ್ತಾರೆ.
    ವಯಸ್ಸಿಗೆ ಬದಲಾಗೊ ಭಕ್ತಿ ಇಂದು ಸಾಕಷ್ಟು ಬದಲಾವಣೆ ಕಂಡಿದೆ ವಿಜ್ಞಾನದ ಮೂಲಕ ಸಾಕಷ್ಟು ಪವಾಡಗಳನ್ನು ಸೃಷ್ಟಿ ಮಾಡುವ ಮನುಷ್ಯನಿಗೆ ದೇವರ ಯಾವುದೆ ಪವಾಡಗಳು ಬೇಕಾಗಿಲ್ಲಾ ಆತನಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಶಾಂತಿ ಹಾಗಗಿಯೆ ಇಂದು ಅನೇಕ ದೇವ ಮಾನವರು ಮಠ ಮಂದಿರಗಳು ನೆಮ್ಮದಿ ಶಾಂತಿ ನೀಡುತ್ತವೆ ಎಂದು ವ್ಯಾಪಾರಕ್ಕಿಳಿದಿವೆ ಧ್ಯಾನ ಯೋಗ ಸೆಂಟರ್ ಗಳು ಹುಟ್ಟಿ ಕೊಂಡಿವ. ಮನುಷ್ಯ ಅವುಗಳಿಂದ ನೆಮ್ಮದಿ ಪಡೆಯಲು ಹೋಗಿ ಇರುವ ನೆಮ್ಮದಿಯನ್ನು ಕಳೆದುಕೊಳ್ಳುತಿದ್ದಾನೆ. ಅದೇನೆ ಇರಲಿ ಅವರವರ ದೆವ್ರು ಭಕ್ತಿ ಅನ್ನೊ ಭಾವನೆ ಅವರ ಅವರಿಗೆ ಮಿಗಿಲು,ಅವರ ಪೂಜೆ ಅವರಿಗೇ ಶ್ರೇಷ್ಠ. ನಿಮ್ ದೆವ್ರು ನಿಮ್ಗೆ ನೆಮ್ದಿ ಕೊಡ್ಲಪ್ಪ .

ಉತ್ತಮ್ ದಾನಿಹಳ್ಳಿ

Wednesday 13 April 2016

ಅನೈತಿಕ ಸಂಬಂಧದಲ್ಲೂ ಭಾವನೆಗಳಿವೆಯ?

ಅದು ಈ ಸಮಾಜದ ಮಟ್ಟಿಗೆ ಅಸಹ್ಯವೇ. ಅದನ್ನು ಅಷ್ಟು ಸುಲಭಕ್ಕೆ ಯಾರು ಒಪ್ಪಿಕೊಳ್ಳುವುದು ಇಲ್ಲ. ಒಂದೊಮ್ಮೆ ಒಪ್ಪಿಕೊಂಡರೂ ಅಲ್ಲಿ ಅರೆಬರೆ ಮನಸ್ಸೇ ಇರುತ್ತದೆ.ಇದೂ ಒಂದು ಸಂಬಂಧವಾ ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿರುತ್ತದೆ.
   ಯಾಕೆಂದರೆ ಅದೊಂದು ಅನೈತಿಕ ಸಂಬಂಧ!
      ಇಂತಹ ಸಂಬಂಧವೊಂದು ಹುಟ್ಟಿಕೊಳ್ಳುವುದು ಹೇಗೆ?  ಅದು ಬೆಸೆದುಕೊಳ್ಳುವುದು ಹೇಗೆ?  ಸಹಜವಾಗಿಯೇ ನಾವು ಇಲ್ಲಿ ದೇಹದ ಆಕರ್ಷಣೆಯೇ ಎಲ್ಲವೂ ಆಗಿರುತ್ತದೆ ಎಂದುಕೊಳ್ಳತ್ತೆವೆ. ಅಂದರೆ ಇಲ್ಲಿ ಭಾವನೆಗಳು ಮುಖ್ಯವಾಗುವುದಿಲ್ಲ. ಅದು ಮದುವೆಗೆ ಮುಂಚಿನ ಸಂಬಂಧವೇ ಆಗಲಿ, ಮದುವೆಯ ನಂತರ ಹುಟ್ಟಿಕೊಳ್ಳುವ ಸಂಬಂಧವೇ ಆಗಲಿ, ಅಲ್ಲಿ  ದೇಹದ ಸೆಳೆತವೇ ಮುಖ್ಯವಾಗಿರುತ್ತದೆ ಎನ್ನುವುದು ನಮ್ಮ. ಭಾವನೆ. ಆದ್ದರಿಂದಲೇ ಅದು ಯಾವುದೇ ರೀತಿಯ ಅನೈತಿಕ ಸಂಬಂಧವಾದರೂ ಶಾಶ್ವತವಲ್ಲ,  ಕ್ಷಣಿಕವಾದದ್ದು ಎಂದೇ ನಾವು ಯೋಚಿಸುತ್ತೇವೆ
   ಇದು ಎಷ್ಟು ಸರಿ?  ಅಲ್ಲಿ ದೇಹಗಳನ್ನು ಮಾತನಾಡಿಕೊಳ್ಳುವಿಕೆ ಮಾತ್ರವೇ ಇರುತ್ತದೆ, ಮನೆಸ್ಸೇನಿದ್ದರೂ ಗೈರು ಹಾಜರಾಗಿರುತ್ತದೆ ಎಂದು ನಾವೇಕೆ ನಿರ್ಧರಿಸುತ್ತೆವೆ? ಯಾಕೆಂದರೆ ನಾವು  ಭಾವನೆಗಳೇನಿದ್ದರು ಸಹಜವಾದ,  ಸಮಾಜ ಒಪ್ಪಿಕೊಳ್ಳುವಂತಹ ಸಂಬಂಧಗಳಲ್ಲಿ ಮಾತ್ರವೇ ಇರುತ್ತದೆ ಎಂದು ಭಾವಿಸುತ್ತೇವೆ. ಅದು ಗಂಡ - ಹೆಂಡತಿ, ಅಣ್ಣ -ತಮ್ಮ, ಅಕ್ಕ-ತಂಗಿ,  ಸ್ನೇಹಿತರು, ನಿಜವಾದ ಪೇಮಿಗಳು, ಈ ಸ್ನೇಹ ಪ್ರೀತಿಯನ್ನೂ ಮೀರಿದಂತಹ ಯಾವುದೇ ರೀತಿಯ ಸಂಬಂಧವಾದರೂ ಅಲ್ಲಿ ಮಾತ್ರವೇ ಭಾವನೆಗಳಿರುತ್ತವೆ ಎನ್ನುವುದು ನಮ್ಮ ಲೆಕ್ಕಾಚಾರ.
    ಒಂದಂತೂ ನಿಜ, ನಮ್ಮೆಲ್ಲರ ಬದುಕು ಬೆಸೆದುಕೊಳ್ಳುವುದು,ಬೆಳೆಯುವುದು ಇದೇ ಭಾವನೆಗಳ ಮೇಲೆ. ಒಂದು ಮನೆ ಕಟ್ಟಲು ತಳಹದಿ ಎಷ್ಟು ಮುಖ್ಯವೋ, ಹಾಗೇ ಬದುಕು ನೆಮ್ಮದಿಯಾಗಿರಲು,ಖುಷಿಯಿಂದಿರಲು ಈ ಭಾವನೆಗಳೇ ಮುಖ್ಯವಾಗಿರುತ್ತವೆ. ಒಂದೊಮ್ಮೆ  ಭಾವನೆಗಳೇ ಇಲ್ಲದೇ ಹೋದರೆ? ಬಹುಶಃ ನಮ್ಮ ಬದುಕನ್ನು ಸುಮ್ಮನೆ ಕೂಡ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗುವುದಿಲ್ಲವೇನೋ. ಈಗ ನಿಮ್ಮ ಯಾವುದಾದರೂ ಸ್ನೇಹ ಸಂಬಂಧವನ್ನೆ ತೆಗೆದುಕೊಳ್ಳಿ. ನೀವಿಬ್ಬರೂ ಯಾಕೆ ಸ್ನೇಹಿತರಾಗದ್ದೀರಿ? ಇಲ್ಲಿ ದೇಹದ ಆಕರ್ಷಣೆಯಂತೂ ಇರುವುದಿಲ್ಲ. ನಿಮ್ಮಿಬ್ಬರ ಸಮಾನ ಅಭಿರುಚಿ, ಆಸಕ್ತಿ, ಒಂದೇ ರೀತಿ ಯೋಚಿಸಿವ ಗುಣಗಳು ನಿಮ್ಮನ್ನು ಹತ್ತಿರ ತಂದಿರುತ್ತವೆ. ನಿಮ್ಮಿಬ್ಬರ ನಡುವೆ ಸ್ನೇಹ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಇದೇ ಕಾರಣದಿಂದಲೆ ನಿಮ್ಮ. ಸ್ನೇಹಿತ ಕಷ್ಟದಲ್ಲಿದ್ದಾನೆ ಎಂದರೆ ನೀವು  ನೊಂದುಕಳ್ಳುತ್ತಿರಿ.ಅವನ ಕಷ್ಟವನ್ನು ನನ್ನದೇ ಎಂದುಕೊಂಡು ಅವನೊಂದಿಗೆ ನಿಲ್ಲತ್ತಿರಿ. ಇಲ್ಲಿ  'ನನ್ನದು' ಎನ್ನುವಂತಹ ಯೋಚನೆ ಇರುವುದಿಲ್ಲ.  'ನಮ್ಮದು' ಎನ್ನುವ ಯೋಚನೆಗೆ ನಮ್ಮ ಮನಸ್ಸಿನ ಭಾವನೆಯೇ ಕಾರಣವಾಗಿರುತ್ತದೆ.
   ಇಂತಹ ಭಾವನೆಗಳೇ ನಮ್ಮ ಬದುಕನ್ನು ನೆಮ್ಮದಿಯಾಗಿಟ್ಟಿರುತ್ತದೆ. ಅಂದರೆ  ಇಲ್ಲಿ  'ನನ್ನವರು'  ಎನ್ನುವ ಭಾವನೆಯೊಂದು ನಮ್ಮೆಲ್ಲರ ಸಂಬಂಧಗಳಲ್ಲೂ ಹರಿದಾಡುತ್ತಿರುತ್ತದೆ. ಏನೋ ಕಷ್ಟ ಬಂತು, ನಾನೊಬ್ಬನೇ.  ನನಗ್ಯಾರೂ ಇಲ್ಲ ಎನ್ನುವುದೆಲ್ಲ ನಮ್ಮ ಮನಸ್ಸಿನಲ್ಲಿ ಬರುವುದೇ ಇಲ್ಲ. ಯಾಕೆಂದರೆ ನನಗೆ ನನ್ನವರು ಎನ್ನುವವರು ಯಾರೊ
ಇದ್ದಾರೆ ಎಂದು ಮನಸ್ಸು ಯೋಚಿಸುವಂತೆ ಮಾಡುತ್ತದೆ. ಹೀಗೆ ಯೋಚಿಸಲು ಕಾರಣವಾಗುವುದು ನಮ್ಮ ಮನಸ್ಸಿನಲ್ಲಿರುವ ಭಾವನೆ. ಇದು ನಮ್ಮ ಬದುಕನ್ನು 'ಸೆಕ್ಯೂರ್ಡ' ಎನ್ನುವಂತಹ ಸ್ಥಿತಿಯಲ್ಲಿಟ್ಟಿರುತ್ತದೆ.ಮತ್ತು ಇದೇ ನಮ್ಮ ಬದುಕಿನ ನೆಮ್ಮದಿ, ಸುಖ, ಶಾಂತಿಗೆ ಕಾರಣವಾಗುತ್ತದೆ.
   ಒಂದೊಮ್ಮೆ 'ನನಗೆ ಯಾರು ಇಲ್ಲ, ಈ ಬದುಕಿನಲ್ಲಿ ನಾನು  ಒಂಟಿ. ನನಗೆ ಏನಾದರೂ ಯಾರೂ ಕೇಳುವವರು ಇಲ್ಲ ' ಎನ್ನುವಂತಹ ಯೋಚನೆಯೊಂದು ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣ
ಹಾದು ಹೋದರೆ ಹೇಗಿರಬಹುದು ಯೋಚಿಸಿ. ಎಷ್ಟೊಂದು ಬ್ಲಾಂಕ್ ಅನ್ನಿಸಿಬಿಡುತ್ತದೆ. ನಾನು ಇಲ್ಲಿ ಯಾಕಿರಬೇಕು ಎನ್ನುವ ಭಾವನೆ ದಟ್ಟವಾಗುತ್ತದೆ.  ಅಂದರೆ ಇಲ್ಲಿ ಭಾವನೆಗಳ ಕೊರತೆಯಿರುತ್ತದೆ. ಇಲ್ಲದೆ ಹೋದರೆ 'ನಾನು' ಎನ್ನುವ ಅಹಂ ಇರುತ್ತದೆ. ಆದ್ದರಿಂದಲೇ ಕೆಲವೊಮ್ಮೆ ನಾವು ಎಲ್ಲಾ ಸಂಬಂಧಗಳಿಂದಲೂ ದೂರವಾಗಿ ಒಂಟಿಯಾಗಿದ್ದು ಬಿಡುತ್ತೇವೆ. ಹಾಗೆಂದು ಒಂಟಿಯಾಗಿರುವವರೆಲ್ಲರೂ ಇದೇ ಕಾರಣದಿಂದ ದೂರವಾಗಿರುತ್ತಾರೆ ಎಂದೇನಿಲ್ಲ. ಅಹಂ ಎನ್ನುವುದಕ್ಕಿಂತ ಹೆಚ್ಚಾಗಿ, ಸಂಭಂಧವೆನ್ನುವುದು ರೂಪುಗೊಂಡ ಭಾವನೆಯೇ ಮೋಸ ಮಾಡಿರಬಹುದು, ನೋವು ಕೊಟ್ಟಿರಬಹುದು, ಕೊನೆಯೇ ಆಗದ ಕಣ್ಣೀರಿಗೂ ಕಾರಣವಾಗಿರಬಹುದು, ಭಾವನೆಗಳಿಂದಲೇ ಕೆಲವರು ಹೀಗೆ ಒಂಟಿಯಾಗಿರುವ ಸಾಧ್ಯತೆಗಳೂ ಇರುತ್ತದೆ.
  ಇಂತಹ ಸಂಬಂಧಗಳಲ್ಲಿ ಭಾವನೆಯೇ ಮುಖ್ಯ,  ಆದ್ದರಿಂದಲೇ 'ನಾವು, ನಮ್ಮದು' ಎನ್ನವುದಿರುತ್ತದೆ. ಇದನ್ನು 'ಅನೈತಿಕ' ಎನ್ನುವಂತಹ ಸಂಬಂಧದಲ್ಲಿ ಹೇಗೆ ತಾನೇ ನಿರೀಕ್ಷಸುತ್ತೀರಿ? ಸಾಧ್ಯವೇ ಇಲ್ಲ ಎಂದು ಇದನ್ನು  ಸುತರಾಂ ಒಪ್ಪಿಕೊಳ್ಳದೇ ಇರುವರು ವಾದಿಸಬಹುದು. ದೇಹದ ಆಕರ್ಷಣೆ ಮಾತ್ರವೇ ಅನೈತಿಕ ಸಂಬಂಧಕ್ಕೆ ಕಾರಣವೆಂದುಕೊಂಡಗ. ಇದನ್ನು ಒಪ್ಪಿಕೊಳ್ಳಬಹುದಾದರೂ ಎಲ್ಲ ಅನೈತಿಕ ಸಂಬಂಧಗಳೂ ಇದೊಂದೇ ಕಾರಣದಿಂದ ಹುಟ್ಟಿಕೊಂಡಿರುವುದಿಲ್ಲ. ಅಲ್ಲಿಯೂ ಭಾವನೆಗಳೇ ಮಖ್ಯವಾಗಿರುತ್ತದೆ. ಭಾವನೆಯ ತಳಹದಿಯ ಮೇಲೆ ಒಂದು ಅನೈತಿಕ ಸಂಬಂಧದ ಹೂವು ಅರಳಿಕೊಂಡು ಬಿಡುತ್ತದೆ.
   ಅವನಿಗೆ ಮದುವೆಯಾಗಿದೆ. ನಾಲ್ಕೈದು ವರ್ಷದ ಮಗುವೂ ಇದೆ. ಸಮಾಜದ ಕಣ್ಣಿಗೆ ಹೆಂಡತಿ ಸುಂದರಿ. ಎಲ್ಲರೊಂದಿಗೂ ನಗುನಗುತ್ತಾ ಮಾತನಾಡುವವಳು. ಇಂತಹ ಹೆಂಡತಿ ಇರುವಾಗ ಅವನು ಬೇರೆಯವರ ಬಗ್ಗೆ ಹೇಗೆ ತಾನೇ ಯೋಚಿಸುತ್ತಾನೆ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಅವನು ಮದುವೆಯ ನಂತರ, ಹೆಂಡತಿ ಇರುವಗಲೇ ಇನ್ನೊಂದು ಹೆಣ್ಣಿನ ಜೊತೆ ಸಂಬಂಧವಿಟ್ಟುಕೊಂಡು ಬಿಡುತ್ತಾನೆ. ಇದ್ಯಾತರ ಸಂಬಂಧ?  ನೋಡುವ ಕಣ್ಣಿಗೆ ಇದು ದೈಹಿಕ ಆಕರ್ಷಣೆಯಿಂದ ಹುಟ್ಟಿದ ಸಂಬಂಧವೇ. ಅಂದಮೇಲೆ ಅಲ್ಲಿ ಭಾವನೆಗಳು ಇರಲು ಹೇಗೆ ಸಾಧ್ಯ?
  ಇದು ಸಮಾಜದ ತೀರ್ಮಾನವಷ್ಟೇ. ಆದರೆ ಹಾಗಿರುವುದಿಲ್ಲ .ಅವನಿಗೆ ದೈಹಿಕ ಸುಖಕ್ಕೆ ಮನೆಯವರು ನೋಡಿ, ತಾನು ಒಪ್ಪಿಕೊಂಡು ಮದುವೆಯಾದ ಹೆಂಡತಿಯಿರುತ್ತಾಳೆ. ಆದರೆ ಅವಳು ಇವನ ಭಾವನೆಗೆ ಸ್ಪಂದಿಸುವ ರೀತಿ? ಅದು ಕಲ್ಲಿನೆದುರು ಮನಸ್ಸನ್ನು ಬಿಚ್ಚಿಟ್ಟಂತೆ. ಅವಳಿಗೆ  ಇವನ ಮನಸ್ಸು,ಭಾವನೆ ಮುಖ್ಯವಾಗಿರುವುದಿಲ್ಲ. ಅವನೆಷ್ಟು ದುಡಿಯುತ್ತಾನೆ,ಅದರಲ್ಲಿ ಏನು ತರುತ್ತಾನೆ,ಎಷ್ಟು ಕುಡಿಸುತ್ತಾನೆ ಎನ್ನುವುದಷ್ಟೇ ಮುಖ್ಯವಾಗಿರುತ್ತದೆ ಬಿಟ್ಟರೆ ಅವಳಿಗೆ ಇವನ ಭಾವನೆಗಳ ಪರಿಚಯವೇ ಇರುವುದಿಲ್ಲ. ಆಸೆ ಪಟ್ಟಾಗ ಇಬ್ಬರೂ ದೈಹಿಕವಾಗಿ ಸೇರುತ್ತಾರೆ. ಅದರ ಗುರುತಿಗೆ ಒಂದು ಮಗುವು ಇದೆ ಬಿಟ್ಟರೆ, ಇವರಿಬ್ಬರ 'ನೈತಿಕ' ಎನ್ನುವಂತಹ ಸಂಬಂಧದಲ್ಲಿ ಭಾವನೆ ಬರ ಬಿದ್ದು ಹೋಗಿರುತ್ತದೆ. ಆದ್ದರಿಂದಲೇ ಅವನು ತನ್ನ ಮನಸ್ಸು - ಭಾವನೆಗಳಿಗಾಗಿ ಇನ್ನೊಬ್ಬಳಿಗೆ ಹತ್ತಿರವಾಗುತ್ತಾನೆ. ಸಮಾಜದ ಕಣ್ಣಿಗೆ ಅದು ಅನೈತಿಕ ಅನ್ನಿಸಿರುತ್ತದೆ.ಆದರೆ ಅವರಿಗೆ ಅದೇ ನೈತಿಕವಾಗಿರುತ್ತದೆ
  ಸಮಾಜದ ಕಣ್ಣಿಗೆ ಅನೈತಿಕವೆಂದು ಕಾಣುವ ಹೆಚ್ಚಿನ ಸಂಬಂಧಗಳಲ್ಲಿಯೂ 'ನಾವು ನಮ್ಮದು' ಎನ್ನುವಂತಹ ಭಾವನೆಯೇ  ಇರುತ್ತದೆ. ಜೊತೆಗೆ ಬೇರೆಲ್ಲ ಸಂಬಂಧಗಳಲ್ಲಿರುವಂತಹ ತೀವ್ರತೆಯೇ ಇಲ್ಲಿಯೂ ಇರುತ್ತದೆ. ಆದ್ದರಿಂದಲೇ ಅವರು ಇಲ್ಲಿ ಒಬ್ಬರಿಗೆ ನೋವಾದರೆ ಇನ್ನೊಬ್ಬರು ಕಣ್ಣೀರಗುತ್ತಾರೆ. ನೊಂದುಕೊಳ್ಳುತ್ತಾರೆ. ಹಾಗೆಂದು ಎಲ್ಲಾ ಸಂಬಂಧಗಳಲ್ಲಿಯೂ ಇದನ್ನು ನಿರೀಕ್ಷಿಸುವುದು ತಪ್ಪಗಿಬಿಡುತ್ತದೆ. ಕೇವಲ ಹಣದ ಆಸೆಗಾಗಿ, ದೈಹಿಕ ಸುಖಕ್ಕಾಗಿ, ಪ್ರತಿಷ್ಠೆಯ ತೆವಲಿಗಾಗಿ ಅನೈತಿಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಮತ್ತು ಅದು ತೀರಿದ ಮೇಲೆ ಮುಗಿದು ಹೋಗುತ್ತದೆ. ಇದು ಸಮಾಜ ನೈತಿಕ ಎಂದು ಕರೆಯುವ ಸಂಬಂಧದಲ್ಲಿ ಆಗುವುದೇ ಇಲ್ಲವಾ? ಸಮಾಜವೇ ಸಾಕ್ಷಿಯಾಗಿ ನಿಂತು ಜೊತೆ ಮಾಡಿಸಿದ ಎಷ್ಟೋ ಸಂಬಂಧಗಳು ಭಾವನೆಯೇ ಇಲ್ಲದೇ ಕೋಲೆ,  ಆತ್ಮಹತ್ಯೆಯಲ್ಲಿ ಕೊನೆಯಾಗುವುದಿಲ್ಲವಾ?
ನಿಜ, ಈ ಬದುಕಿಗೆ ಭಾವನೆಯೇ ಮುಖ್ಯ.ಭಾವನೆಯಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಅಲ್ಲಿ ನೈತಿಕ, ಅನೈತಿಕ ಎನ್ನುವುದು ಮುಖ್ಯವಾಗದೇ ಮನುಷ್ಯ, ಮನಸ್ಸು ಹಾಗೂ ಅದು ಯೋಚಿಸುವ ರೀತಿ ಮಾತ್ರವೇ ಮುಖ್ಯವಾಗುತ್ತದೆ 😍 😄 😒

ಉತ್ತಮ್ ದಾನಿಹಳ್ಳಿ

(ಮೇ 2013 ರ "ಮಾನಸ" ಪತ್ರಿಕೆಯಲ್ಲಿ ಪ್ರಕಟವಗಿದ್ದ ಲೇಖನ)