Friday 13 September 2019

ಯಾಂತ್ರಿಕತೆಯ ಬದುಕಿನಲ್ಲಿ

ಇತ್ತಚೆಗ್ಯಾಕೊ
ಇ ಸಂದೇಶಗಳಲ್ಲಿ
ಭಾವಗಳಿಲ್ಲ
ದಿನದ ಶುಭಷಯಗಳು
ಕೇವಲ ಯಾಂತ್ರಿಕವಷ್ಟೆ

ಊಟ,ತಿಂಡಿ, ಕಾಫಿ,ಟೀ
ಆಗಿದೆಯೆಂದು ತಿಳಿದಿದ್ದರು
ಮಾತಿನ ಆರಂಭ
ಪ್ರಾರಂಭ ವಾಗಬೇಕಷ್ಟೆ

ಪ್ರೇಮಿಗಳಿಗೂ
ಮಾತು ಬೇಸರವಾಗುತ್ತದೆ
ಸ್ನೇಹ ಕೂಡ
ಕೊಟ್ಟು ತೆಗೆದುಕೊಳ್ಳುವ
ನೀರಿಕ್ಷೆಯಲ್ಲಷ್ಷೆ
ಚೆಂದವಂತೆ

ಅತಿಯಾಗಿ ಲಲ್ಲೆಗರೆಯುವ
ಮೋಹವೆ ಹುಟ್ಟತ್ತಿಲ್ಲ
ಆಸೆಯಿದ್ದರು ಕಾಮ
ಹಾಕಿ ಫುಲ್ ಸ್ಟಾಪ್
ಇಡುವಲ್ಲಿಗೆ ಮಾತು
ಮುಗಿಯುತ್ತದೆ

ದೂರವಾಗುವೆವು ಎಂಬ
ಭೀತಿಯಲ್ಲಿ ಮಾತಿಗೆ
ಮಿತಿ ಇಟ್ಟು
ಎದೆ ಭಾರ
ಮಾಡಿಕೊಂಡು
ಹೃದಯಾಘಾತವಾಗಬೇಕಷ್ಟೆ

#ಯಾಂತ್ರಿಕತೆಯ_ಬದುಕು
#ಉತ್ತಮ್

ಕವಿತೆಯೆಂದರೆ

ಈಗೀಗ ಕವಿತೆ
ಬರೆಯುವುದೆಂದರೆ
ಕೈ ನಡುಗುತ್ತದೆ
ಎದೆ ಭಾರವಾಗುತ್ತದೆ

ಅದಕ್ಕಾಗೆ ಒಂದೆರಡು
ಪೇಗ್ ವಿಸ್ಕಿ ಇಳಿಸಿ
ನಡುವೆ
ಒಂದೆರಡು ಸಿಗರೆಟ್
ಸುಟ್ಟು ಪೆನ್
ಹೀಡಿದು ಕುಳಿತೆ

ಮತ್ತದೆ ಪ್ರಶ್ನೆ
ಯಾಕೆ ಕವಿತೆ !?
ಏನು ಕವಿತೆ !?
ಹೇಗೆ ಕವಿತೆ !?

ಸತ್ಯ-ಸುಳ್ಳು
ಗಳೆಲ್ಲಾ ಕಲಬೆರಕೆ
ಯಾಗಿ ಸುಳ್ಳುಗಳೆ
ಸತ್ಯವಾಗಿರುವಾಗ
ಕವಿತೆಯಿಂದೆನು
ಸತ್ಯನ್ವೇಷಣೆಯಾಗುತ್ತದೆ

ಹೋಗಳಲೊಬ್ಬ
ತೆಗಳಲೊಬ್ಬ
ನಾಯಕನ ಜೋತೆಗಿರುವಾಗ
ಇನೆಂತ ಕ್ರಾಂತಿಯಾಗಬಲ್ಲದು
ಕವಿತೆಯಿಂದ

ಕವಿತೆಗ್ಯಾವ ಹೇಣ್ಣು
ಒಲಿದಿದ್ದು ಕೇಳಾಲಿಲ್ಲ
ನಲಿದ ಹೇಣ್ಣು
ಪ್ರಾಸ ಪದಗಳಿಗೊ
ಕವಿತೆ ಅಂತರ್ಯಾಕ್ಕೊ
ಮರುಗದೆ ಬರೆದವನ
ಸುಳ್ಳಿಗಷ್ಟೆ ಉಳಿಯುತ್ತಾಳೇನೊ

ಯುದ್ದವಾದರೆ ಆಗಲಿ
ಬುದ್ದ ನಕ್ಕರೆ ನಗಲಿ
ಮಗು ನಕ್ಕರೆ
ನಗು ಸತ್ತರೆ
ಹಿಂಗೆಲ್ಲ ಅಸಂಬದ್ಧಗಳಿಗೆ
ಕವಿತೆ ಹುಟ್ಟುವೂದು ಇಲ್ಲ

ಅದೆ ಹೆಣ್ಣು ಹಣ್ಣು
ಪ್ರೀತಿ ಕಾಮ
ಮೋಹ ದಾಹ
ನೋವು ನಲಿವು
ಬದುಕು ಬಾವಣೆ
ಪದಗಳೆಲ್ಲ ಸವಕಾಲಾಗಿ
ಪೇಲಾವ ಕವಿತೆಗಳನ್ನೆ
ಮತ್ತೆ ಮತ್ತೆ ಹೇಗೆ ಬರೆಯಲಿ

ಒಲಿದಿದ್ದುಯಾವಗಲೂ
ಆಹ್ಲಾದವಾಗಿರುವುದಿಲ್ಲ
ಒಮ್ಮೊಮ್ಮೆ ತಡಕಾಡಿ
ತಡಬಡಿಸಿ ಬರೆದುಕೊಂಡರು
ಸಪ್ಪೆಯೆನಿಸಿ ಕೈ ಚೆಲ್ಲಿ
ಬೀಡುತ್ತೆನೆ, ಕವಿತೆಯ
ಸಹವಾಸವನ್ನೆ ಬಿಟ್ಟು
ಮತ್ತದೆ ವಿಸ್ಕಿ ಸಿಗರೆಟಿನ
ಕಡೆ ಗಮನ ಹರಿಸುತ್ತೆನೆ

#ಕವಿತೆಯೆಂದರೆ
#ಉತ್ತಮ್