Saturday 14 January 2017

ಕವಿತೆ

ಸೂರ್ಯ ಪಥ
ಬದಲಾಯಿಸಿದನಂತೆ
ಲೋಕದ ಕತ್ತಲೆಯಲ್ಲಿ
ಬದುಕು ಮಗ್ಗಲು
ಬದಲಾಯಿಸಿದ್ದು
ಅರಿವಾಗದಂತೆ
ನಿದ್ದೆ ಹೋಗಿರುವ
ಅಮಾಯಕರು ನಾವು

ಅದ್ಯಾವುದೋ
ಎಡಬಲಗಳ
ನಡುವಲ್ಲಿ
ಉಳಿದವನು
ಮತಿಭ್ರಮಣನಾಗಬಹುದು

ಆಸ್ತಿಕತೆ  ನಾಸ್ತಿಕತೆಯ
ದ್ವಂದ್ವದೊಳಗೆ
ದೇವರೇ ನಂಬಿಕೆ
ಕಳೆದುಕೊಳ್ಳಬಹುದು

ಶರವೇಗದ ಬದುಕಿದು
ಸರತಿ ಸಾಲಿನಲ್ಲಿ
ನಿಧಾನವಾಗಿ ಚಲಿಸಿ
ನೆಮ್ಮದಿ ಪಡೆದುಕೊಳ್ಳಬೇಕು

#ಉತ್ತಮ್#

No comments:

Post a Comment