ಕವಿತೆ ಬರೆಯೊಣವೆಂದುಕೊಂಡರೆ
ಹಾಳೆಗ್ಯಾವ ಅಕ್ಷರವೂ
ಇಳಿಯುತ್ತಿಲ್ಲ
ಮೊದಲೆಲ್ಲ ಬರೆದಿಟ್ಟ
ಕವಿತೆಗಳೆಲ್ಲ
ಪೇಲವವೆನಿಸುತ್ತದೆ
ಮೊನ್ನೆ ಸ್ವರ್ಗದೂರಿಗೆ
ನೆರೆ ಬಂದು ಜೀವ
ಭಯ ಹಸಿವಿನ
ಭೊದನೆ ಮಾಡಿದ್ದು
ಎದೆಯಳೊಗೊಂದು
ತಲ್ಲಣ ಹುಟ್ಟಿಸುತ್ತದೆ
ರಕ್ತವೇನೂ ಹರಿಯಲಿಲ್ಲ
ಕುಸಿದ ಮಣ್ಣು
ಬಿದ್ದ ಇಟ್ಟಿಗೆ ಚೂರು
ಅಹಂ ನೂರಿನ ದಾರಿಯನ್ನು
ಮುಚ್ಚಿದ್ದು ಸುಳ್ಳಲ್ಲ
ಕಣ್ಣಿರ್ಯಾವುದು
ಮಳೆನೀರ್ಯಾವುದು
ತಿಳಿಯದೆ ಕೈ ಹಿಡಿದು
ಬದುಕಿಸಿದವರಿಗೆ
ಸಂತೃಪ್ತಿ ಯಷ್ಟೆ
ಬೇರ್ಯಾವ ನಿರೀಕ್ಷೆಗಳಿಲ್ಲ
ಬಿಸ್ಕೆಟ್ ಎಸೆದವನಿಗೆ
ಇ ನೋವು ಹಸಿವು
ಬರದೆ ಇರಬಹುದು
ಪಡೆದುಕೊಂಡವರ
ಎದೆಯಲ್ಲಿ ಮಾತ್ರ
ಹಸಿವು ನೀಗಿಸಿದವನ
ಕೈಗಳಷ್ಟೆ ನೆನಪು
ಇಲ್ಯಾವುದೆ
ತತ್ವ ಸಿದ್ದಾಂತಗಳು
ಬರಲಿಲ್ಲ
ಮೇಲು ಕೀಳೆಂಬ
ಅಹಂ ನಿಲ್ಲಲಿಲ್ಲ
ಇಲ್ಲೂಳಿದಿದೊಂದೆ
ಕಡೆಗೂ ಮಾನವೀಯತೆ
ಪ್ರವಾಹ ಬರಬಹುದು
ಮತ್ತೆ ನಮ್ಮ ಅಹಂಗಳನ್ನು
ನಿಮ್ಮ ತತ್ವ ಸಿದ್ದಾಂತಗಳು
ಮೇಲು ಕಿಳೆಂಬ
ಮನಸ್ಥಿತಿಗಳು
ಜೋಪಾನ
ಕೊಚ್ಚಿ ಹೋಗುವ
ಮುನ್ನ ಮಲಗೆದ್ದು ಬಿಡಿ
#ಉತ್ತಮ್
#ನೆರೆಯನೊವಿಗೊಂಚುರು_ನಿಟ್ಟುಸಿರು
No comments:
Post a Comment