Sunday 23 June 2019

ನೆನಪೆಂಬ ನೋವಿಗೆ

ಕಡೆಗೂ ಯಾರು
ಉಳಿಯಲಿಲ್ಲ ನನ್ನ ಪಾಲಿಗೆ
ಸತ್ಯ ಮಿಥ್ಯ ಎಂಬ
ಬೂದಿ ಮುಚ್ಚಿದ
ಕೆಂಡೊದೊಳಗೆ
ಉರಿದು ಹೋಗಿದ್ದು
ಪ್ರೀತಿ ನಂಬಿಕೆಗಳೆಂದು
ತಿಳಿಯಲೆ ಇಲ್ಲ ನನಗೆ

ಸಂಬಂದಗಳ ಹೋಲಿಕೆ
ಭಾವನೆಗಳ ಆಳಕೆ
ಇಳಿದಿದ್ದು ಪರಿಸ್ಥಿತಿಗಳ
ಮೋಹ ಅಂತಸ್ಥಿಕೆ

ಕೊಟ್ಟು ಪಡೆದುಕೊಳ್ಳುವುದೆಲ್ಲ
ಮಾಮೂಲಿ ಇಲ್ಲಿ
ಕೊಟ್ಟು ಕೇಳಬಾರದು
ಕೇಳಿ ಪಡೆದುಕೊಳ್ಳಬಾರದು
ಕೊಟ್ಟಿದ್ದು ಲೇಕ್ಕ ಇಡಬಾರದು
ಪಡೆದಿದ್ದು ಪೆರಿಸಿ ಇಡಬಾರದು
ಆಗ ನೆನೆಪೆಂಬುದು ಬದುಕು
ಪೂರ್ತಿ ಎದೆಭಾರ ಮಾಡಿಬಿಡುತ್ತದೆ

ಒತ್ತಡ ಹಾಕಿ
ಒತ್ತಯ ಮಾಡಿ
ಪಡೆದುಕೊಂಡಿದ್ಯಾವುದು
ಶಾಸ್ವತವಲ್ಲ
ಇದ್ದಷ್ಟು ದಿನ ನೀನು
ಬದುಕಿದಷ್ಟು ದಿನ
ನಿನ್ನ ನೆನಪು
ನನ್ನೆದೆಯೊಳಗೆ ಬೆಚ್ಚಗೆ
ಉಳಿಯುವುದು

ನನ್ನ ನೋವಿಗೆ
ಕವಿತೆ ಬರೆದು
ಸಮಾಧಾನಿಸಿಕೊಳ್ಳುತ್ತಿದ್ದೆನೆ
ನಿನಗಲ್ಲ ಬೀಡು
ದಾಸನದವನೊಬ್ಬ
ಮೋಸ ಮಾಡಿದನೆಂದು
ಕೋನೆಯವರೆಗೂ
ಕೊರಗಬೇಡ
ಎಂದೊ ಬರೆದ
ಸಾಲಿನ ಕೊನೆಗೊಂದು
ಶ್ರಾದ್ದಂಜಲಿ ಅರ್ಪಿಸಿ
ಮನ್ನಡೆದು ಬೀಡು

#ಉತ್ತಮ್
#ನೆನಪೆಂಬ_ನೋವಿಗೆ

No comments:

Post a Comment